ದೇವಸ್ಥಾನದಲ್ಲಿ ನಡೆಯುವ ಪೂಜಾದಿಗಳ ಸಮಯ::

  • ಬೆಳಿಗ್ಗೆ 6 ಗಂಟೆಗೆ ನಿರ್ಮಾಲ್ಯ ವಿಸರ್ಜನೆ ಸಹಿತ ಉಷಃಕಾಲ ಪೂಜೆ
  • ಅಪರಾಹ್ನ 11 ಗಂಟೆಗೆ ಪಂಚಾಮೃತ ಸಹಿತ ಉಪನಿಷತ್ ಕಲಶಾಭಿಷೇಕ
  • ಮದ್ಯಾಹ್ನ 1 ಗಂಟೆಗೆ ಮಹಾಪೂಜೆ
  • ಸಂಜೆ 6 ರಿಂದ ರಂಗ ಪೂಜಾದಿ ಉತ್ಸವ
  • ರಾತ್ರಿ 8.30 ಗೆ ರಾತ್ರಿ ಪೂಜೆ
  • ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ವಾಹನ ಪೂಜೆಯನ್ನು ಮಾಡಲಾಗುವುದಿಲ್ಲ
  • ಸತ್ಯನಾರಾಯಣ ಪೂಜೆ ವಾರದಲ್ಲಿ 3 ದಿನ ( ಭಾನುವಾರ, ಮಂಗಳವಾರ, ಶುಕ್ರವಾರ) ಹಾಗೂ ಹುಣ್ಣಿಮೆಯಂದು ಮಾತ್ರ ಮಾಡಲಾಗುತ್ತದೆ. ಸಂಕಷ್ಟಹರ ಚತುರ್ಥೀ ಹಾಗೂ ಇತರ ವಿಶೇಷ ದಿನದಲ್ಲಿ ಈ ಪೂಜೆ ಇರುವುದಿಲ್ಲ

 

ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜಾದಿಗಳು ಹಾಗೂ ಉತ್ಸವಗಳ ವಿವರ:

  • ದೈನಂದಿನ ೩೧ ಆವರ್ತನ ಗಣಪತಿ ಉಪನಿಷತ್ ಅಭಿಮಂತ್ರಣ ಪೂರ್ವಕ ಕಲಶ, ಏಕ ನಾರಿಕೇಳ ಗಣಹೋಮ, ಸಾಮೂಹಿಕವಾಗಿ 108 ಕಾಯಿ ಗಣಹೋಮ ,( ಏಕಾದಶಿ ಹೊರತು ಪಡಿಸಿ) ದ್ವಾದಶಿ 24 ಕಾಯಿ ಗಣಹೋಮ ನಡೆಯುತ್ತದೆ.
  • ಪ್ರತೀದಿನ ಮುಂಜಾನೆ ಪೂಜೆಯ ನಂತರ ದೇವರಿಗೆ ಸಮರ್ಪಿಸಿದ ಬೆಲ್ಲ ಕಡಲೆಯ ಪಂಜಕಜ್ಜಾಯ ವಿತರಣೆ.
  • ಪ್ರತೀದಿನ 108 ಕಾಯಿ ಗಣಹೋಮ ಹಾಗೂ ಸಂಕಷ್ಟಹರ ಚತುರ್ಥಿಯ ದಿನ 1008 ಕಾಯಿ ಗಣಹೋಮ ನಡೆಯತ್ತದೆ.( ಏಕಾದಶಿ ದ್ವಾದಶಿ ಹೊರತುಪಡಿಸಿ)
  • ಶ್ರಾವಣ ಮಾಸದಲ್ಲಿ ಸಹಸ್ರಾವರ್ತನೆ ಗಣಪತಿ ಅತರ್ವಶೀರ್ಷಾ ಅಭಿಷೇಕ ಹಾಗೂ ಬ್ರಾಹ್ಮಣಾರಾಧನೆ.
  • ಬಾದ್ರಪದ ಶುದ್ಧ ಗಣೇಶ ಚತುರ್ಥಿ ವಿಶೇಷ ಕಟ್ಟು ಕಟ್ಟಲೆ ವಿನಿಯೋಗ.
  • ಅಶ್ವೀಜ ಕಾರ್ತಿಕ ಮಾಸದಲ್ಲಿ ಪಕ್ಷಿ ಜಾಗರ ಪೂಜೆ ವಿನಿಯೋಗ.
  • ಕಾರ್ತೀಕ ಮಾಸದಲ್ಲಿ ಮದ್ಯಾಹ್ನ ದಾತ್ರಿ ಹೋಮ, ವನಭೋಜನ, 1008 ಕಾಯಿ ಗಣಹೋಮ, ರಾತ್ತಿ ಮಹಾರಂಗಪೂಜೆ, ಲಕ್ಷದೀಪ ಸಹಿತ ರಜತ ರಥೋತ್ಸವ ಹಾಗೂ ಸುಡು ಮದ್ದು ಪ್ರದರ್ಶನ ನಡೆಯುತ್ತದೆ
  • ಕಾರ್ತಿಕ ದೀಪಾರಾದನೆ ಹಾಗೂ ರಂಗಪೂಜಾ ವಿನಿಯೋಗ
  • ಶ್ರೀ ದೇವಳದಲ್ಲಿ ಕಾರ್ತೀಕ ಮಾಸದ ಸಂಕಷ್ಟಹರ ಚತುರ್ಥಿಯಿಂದ ಜೇಷ್ಟ ಮಾಸದ ಸಂಕಷ್ಟಹರ ಚತುರ್ಥೀಯ ವರೆಗೆ ಮಾತ್ರ ಪುಷ್ಪಕ ರಥೋತ್ಸವ ಹಾಗೂ ರಜತ ರಥೋತ್ಸವ ಸೇವೆಗಳು ನಡೆಯುತ್ತದೆ
  • ಧನುರ್ಮಾಸದಲ್ಲಿ ದೈನಂದಿನ ಹುಗ್ಗಿ ದೋಸೆ ನೈವೇದ್ಯ
  • ಧನುರ್ಮಾಸದಲ್ಲಿ ಬ್ರಾಹ್ಮಣಾರಾಧನೆ.
  • ವೈಶಾಖ ಮಾಸದಲ್ಲಿ ಗುಡೋಧಕ ನೈವೇದ್ಯ.
  • ವೈಶಾಖ ಮಾಸದಲ್ಲಿ ವಸಂತಾರಾಧನೆ.
  • ಪ್ರತಿ ಸಂಕಷ್ಟ ಹರ ಚತುರ್ಥಿ ದಿನದಂದು ದೊಡ್ಡ ರಂಗಪೂಜೆ ಸಹಿತ ಪುಷ್ಪಕ ರಥೋತ್ಸವ ಹಾಗೂ ವಸಂತಾರಾಧನೆ.
ಶ್ರೀ ಕ್ಷೇತ್ರದ ಹಬ್ಬ ಮತ್ತು ಉತ್ಸವಗಳು

ವಾರ್ಷಿಕ ಬ್ರಹ್ಮರಥೋತ್ಸವ


ಲಕ್ಷದೀಪೋತ್ಸವ


ಮೂಡುಗಣಪತಿ ಸೇವೆ


ಸಹಸ್ರ ನಾರಿಕೇಳ ಗಣಯಾಗ


ಭಾದ್ರಪದ ಶುದ್ಧ ಗಣೇಶ ಚತುರ್ಥಿ:


ಪಲ್ಲಕ್ಕಿ ಉತ್ಸವ